ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮಾತನಾಡಿ, ಈ ಪರೇಡ್ ಐಎಫ್ಆರ್ ಮತ್ತು ಮಿಲನ್-2026ರ ಪ್ರಮುಖ ಆಕರ್ಷಣೆಯಾಗಿದೆ. ಸುರಕ್ಷಿತ ಮತ್ತು ಮುಕ್ತ ಸಮುದ್ರ ಖಾತರಿಪಡಿಸಲು ಸೌಹಾರ್ದ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಭಾರತೀಯ ನೌಕಾಪಡೆ ಸದಾ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಕಾರ್ಯಕ್ರಮವು ಚೇತಕ್ ಹೆಲಿಕಾಪ್ಟರ್ಗಳ ಬ್ಯಾನರ್ ಹಾರಾಟದೊಂದಿಗೆ ಪ್ರಾರಂಭವಾಯಿತು. ಸಮುದ್ರದಲ್ಲಿ ನಡೆಯುವ ರಕ್ಷಣಾ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆ ಹಾಗೂ ಮಿಗ್-29ಕೆ ಯುದ್ಧ ವಿಮಾನಗಳ ಸಾಹಸಮಯ ಹಾರಾಟ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿತು.
ಸಶಸ್ತ್ರ ಪಡೆಗಳು ಮತ್ತು ವಿದೇಶಿ ಪ್ರತಿನಿಧಿಗಳ ಶಿಸ್ತುಬದ್ಧ ಪಥಸಂಚಲನವು ಮೆರವಣಿಗೆಗೆ ಮೆರುಗು ನೀಡಿತು. ಎನ್ಸಿಸಿ, ಸೀ ಕ್ಯಾಡೆಟ್ ಕಾರ್ಪ್ಸ್ ಮತ್ತು ನೌಕಾಪಡೆ ಶಾಲೆಯ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ವಿಭಾಗದಲ್ಲಿ ಪೂರ್ವ ನೌಕಾ ಕಮಾಂಡ್ನ ಕೆಡೆಟ್ಗಳಿಂದ ಹಾರ್ನ್ಪೈಪ್ ನೃತ್ಯ ಮತ್ತು ಭಾರತದ ಶ್ರೀಮಂತ ಸಮುದ್ರ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಪ್ರದರ್ಶಿಸಲ್ಪಟ್ಟವು.

